Slide
Slide
Slide
previous arrow
next arrow

ಹಿರಿಯ ಮದ್ದಲೆ ವಾದಕಿಯ ಚಿಕಿತ್ಸೆಗೆ ಬೇಕಿದೆ ನೆರವು

300x250 AD

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಪಂಚಾಯತ ವ್ಯಾಪ್ತಿಯ ಮಲ್ಲಾಪುರದ ಸರಸ್ವತಿ ಭಟ್ಟ ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಅವರಿಗೆ ಮಾನವೀಯ ಅಂತಃಕರಣ ಆರ್ಥಿಕ ಸಹಾಯದ ಅಗತ್ಯತೆಯಿದೆ.

ಸರಸ್ವತಿ ಭಟ್ಟರವರು 1969ರಿಂದ 80 ದಶಕದ ಆದಿಯವರೆಗೂ ಭರತನಹಳ್ಳಿ ಮಕ್ಕಳ ಯಕ್ಷಗಾನ ಮೇಳದ ಖಾಯಂ ಮದ್ದಲೆ ವಾದಕಿಯಾಗಿದ್ದವರು. ಅವಿವಾಹಿತೆಯಾಗಿರುವ ಇವರಿಗೆ ಆಸರೆಯಾಗಿ ಯಾರೂ ಇರುವುದಿಲ್ಲ. ಇದ್ದ ಆಸ್ತಿಯನ್ನೆಲ್ಲ ಮಾರಿಕೊಂಡಿದ್ದು, ಅದರಿಂದ ಬಂದ ಹಣವಷ್ಟೂ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಖರ್ಚು ಮಾಡಿದ್ದಾರೆ.

ಕ್ಯಾನ್ಸರ್ ಬಾಯಿಯಲ್ಲಿ ಆಗಿರುವುದರಿಂದ ಅನ್ನ ಉಣ್ಣಲೂ ಆಗುವುದಿಲ್ಲ. ಗಂಜಿ ಮಾಡಿ ಅದನ್ನು ಮಿಕ್ಸರಿನಲ್ಲಿ ಬೀಸಿಕೊಂಡು ಕುಡಿಯುತ್ತಾರೆ. ಈಗಾಗಲೇ ಎರಡು ಆಪರೇಶನ್ ಆಗಿದ್ದು, ವೈದ್ಯರು ರೋಗ ಮೂರನೆ ಹಂತದಲ್ಲಿದೆಯೆಂದು ತಿಳಿಸಿರುತ್ತಾರೆ. ಪ್ರತಿ ಎರಡು ತಿಂಗಳಿಗೊಮ್ಮೆ ಮಂಗಳೂರು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬರಲು ಸುಮಾರು ಹತ್ತು ಸಾವಿರ ಹಣ ಬೇಕಾಗುವುದರಿಂದ ಮಾನವೀಯ ಅಂತಃಕರಣ ಹೊಂದಿರುವವರ ಸಹಾಯ ಅನಿವಾರ್ಯವಾಗಿದೆ.

300x250 AD

ಅವರ ಉಮ್ಮಚಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಐಎಫ್‌ಎಸ್‌ಸಿ ಕೋಡ್: KVGB0009551 ಆಗಿದೆ. ಖಾತೆ ನಂಬರ್: 89101608037 ಆಗಿದೆ. ಅವರ ಮೊಬೈಲ್ ನಂಬರ್:+91 9482652254, +919480790817

Share This
300x250 AD
300x250 AD
300x250 AD
Back to top